Discover millions of ebooks, audiobooks, and so much more with a free trial

Only $11.99/month after trial. Cancel anytime.

Kanamareyada Kathegalu Bhaaga 1
Kanamareyada Kathegalu Bhaaga 1
Kanamareyada Kathegalu Bhaaga 1
Ebook79 pages2 hours

Kanamareyada Kathegalu Bhaaga 1

Rating: 0 out of 5 stars

()

Read preview

About this ebook

ಮಕ್ಕಳಿಗೆ ಮೌಲ್ಯವನ್ನು ತಿಳಿಸುವ ಸಲುವಾಗಿ ರೂಪಿಸಲಾಗಿರುವ ಈ ಕತೆಗಳಲ್ಲಿ ಆಧ್ಯಾತ್ಮಿಕ ವಿಚಾರವೂ ಇದ್ದು, ಮಕ್ಕಳು ಇಂದು ಕಲಿತ ವಿಷಯಗಳನ್ನು ಮೌಲ್ಯಗಳನ್ನೂ ಜೀವನ ಪರ್ಯಂತ ಪಾಲಿಸಲು,ಜೊತೆಗೆ ಕಷ್ಟದ ಸಮಯದಲ್ಲಿ ಧೈರ್ಯ ಹೊಂದಲು ಸಹಕಾರಿಯಾಗಿವೆ. ಸರಳ ಭಾಷೆಯಲ್ಲಿರುವ ಈ ಕತೆಗಳು ಕೇವಲ ಮಕ್ಕಳಲ್ಲದೆ ವಯಸ್ಕರಿಗೂ ದಾರಿದೀಪ ಎನ್ನುವುದರಲ್ಲಿ ಸಂಶಯವಿಲ್ಲ.
LanguageKannada
Release dateApr 2, 2021
ISBN6580239206401
Kanamareyada Kathegalu Bhaaga 1

Read more from Sadhana Publications

Related to Kanamareyada Kathegalu Bhaaga 1

Related ebooks

Reviews for Kanamareyada Kathegalu Bhaaga 1

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kanamareyada Kathegalu Bhaaga 1 - Sadhana Publications

    https://www.pustaka.co.in

    ಕಣ್ಮರೆಯಾದ ಕತೆಗಳು ಭಾಗ ೧

    Kanamareyada Kathegalu Bhaaga 1

    Author:

    ಸಾಧನಾ ಪಬ್ಲಿಕೇಷನ್

    Sadhana Publications

    For more books

    https://www.pustaka.co.in/home/author/sadhana-publications

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ

    1. ಜಗನ್ಮಾತೆ

    2. ಪರಿವರ್ತನೆ

    3. ಹೋಗಿ ಬರುವುದು ಇಷ್ಟೇನಾ ಬದುಕು

    4. ಯಾರೀ ಗುರು

    5. ಎದುರಿಸಿ ಕಷ್ಟವನ್ನು ಪರಿಹಾರ ಕಾಣಬೇಕಾದರೆ

    6. ಸಂರಕ್ಷಣೆ

    7. ಸಹಿಸಿದಾತ ಬಾಳಿಯಾನು

    8. ದೂರದಿರಿ ಕಷ್ಟ ಬಂತೆಂದು

    9. ನುಡಿದಂತೆ ನಡೆಯದಿದ್ದರೆ

    10. ತಿರುಗು ಬಾಣ

    11. ಪರೀಕ್ಷಾ ಮನೋಭಾವವಿದ್ದರೆ

    12. ಒಳ್ಳೆಯದನ್ನು ಹಂಚಿ ತಿಂದರೆ

    13. ಹೇಳಿದ್ದು ಸಾರ್ಥಕವಾಗಬೇಕಿದ್ದರೆ

    14. ಯಾವಾಗ ಉಪಯೋಗಿಸಬೇಕು ಆಧ್ಯಾತ್ಮಿಕ ಅಸ್ತ್ರ

    15. ಮೂರು ಸರಿ ಉತ್ತರ

    16. ‘ನಾನು’ ಎಂಬ ಅಹಂಕಾರವೊಂದು ಹೋದರೆ

    17. ಸತ್ಯ ನಂಬಿ ಕೆಟ್ಟವರಿಲ್ಲ

    18. ಎಲ್ಲವೂ ಆತನ ಇಚ್ಛೆಯಂತೆ

    19. ಬೇಲಿಯೇ ಹೊಲ ಮೇಯ್ದರೆ

    20. ರಹಸ್ಯ

    21. ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ?

    22. ಎಲ್ಲರಲ್ಲೂ ಭಗವಂತ

    23. ಭಗವಂತನಿರಲು ಭಯವೇಕೆ?

    24. ಕ್ಷಣದಲ್ಲಿ ಜ್ಞಾನೋದಯ

    25. ಅತಿಯಾಸೆಯಾದರೆ

    1. ಜಗನ್ಮಾತೆ

    ಸತ್ಯವೇ ನಮ್ಮ ತಂದೆ ತಾಯಿ. ಸತ್ಯವೇ ನಮ್ಮ ಬಂಧು ಬಳಗ. ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ

    ಮೆಚ್ಚನಾ ಪರಮಾತ್ಮನು. ಇದನ್ನು ಚಿಕ್ಕವರಿದ್ದಾಗಲೇ ನಮ್ಮ ಗುರುಗಳು ಹಿರಿಯರು ಹೇಳಿಕೊಡುತ್ತಾರೆ. ಆದರೂ ಒಂದೊಂದು ಸಲ ನಮ್ಮಿಂದ ತಪ್ಪುಗಳು ನಡೆದೇ ನಡೆಯುತ್ತದೆ. ಆಗ ಭಗವಂತನನ್ನು ನೆನದರೆ ಸಾಕು ಸತ್ಯ ಮನದಿಂದ. ನಮ್ಮ ತಾಯಿ ನಮ್ಮ ಜೊತೆಯಲ್ಲಿ ಹೇಗೆ ನಡೆದುಕೊಳ್ಳುತ್ತಾಳೆ. ಮಕ್ಕಳು ಮಾಡಿದ್ದು ತಪ್ಪು ಅಂತ ತಿಳಿದರೂ ಅವರನ್ನು ಕಾಪಾಡುವ ಸಲುವಾಗಿ ಆ ತಪ್ಪನ್ನು ತನ್ನ ಮೇಲೆ ಹೊರಿಸಿಕೊಳ್ಳುತ್ತಾಳೆ ಎಷ್ಟೋ ಸಲ. ಹಾಗಿರುವಾಗ ನಮ್ಮೆಲ್ಲರ ಸೃಷ್ಟಿಗೆ ಕಾರಣರಾದ ಜಗನ್ಮಾತೆಯಲ್ಲಿ ಅಥವಾ ಭಗವಂತನಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡರೆ!

    ಒಂದು ಕಥೆ ಕೇಳಿ:

    ಕಾಳಿ ಮಂದಿರದಲ್ಲಿ ಪೂಜಾರಿಗೆ ಪ್ರತಿದಿನ ರಾಜನ ಮನೆಯಿಂದ ಪೂಜೆಗಾಗಿ ಹೂವಿನ ಮಾಲೆ ಬರುತ್ತಿತ್ತು. ಪೂಜಾ ಸಮಯದಲ್ಲಿ ಆ ಹೂವಿನಿಂದ ವಿಗ್ರಹಕ್ಕೆ ಶ್ರದ್ದಾ ಭಕ್ತಿಯಿಂದ ಶೃಂಗಾರ ಮಾಡಿ ದೀಪ ಹೋಮಗಳ ನಂತರ ಅದೇ ಹೂವನ್ನು ತೆಗೆದು ಪ್ರಸಾದ ಅಂತ ರಾಜನ ಅರಮನೆಗೆ ಕಳುಹಿಸಿಕೊಡುತ್ತಿದ್ದ ಪೂಜಾರಿ. ಒಂದು ದಿನ ಚಂದದ ಘಮಘಮಿಸುವ ಸುಂದರ ಹೂವಿನ ಮಾಲೆಯನ್ನು ಕಂಡು ಒಂದು ಆಲೋಚನೆ ಬಂದಿತು. ಪ್ರತಿದಿನ ದೇವಿಗೆ ಹೂ ಮುಡಿಸುತ್ತಿದ್ದೇನೆ. ಈ ಒಂದು ದಿನ ತನ್ನ ಪತ್ನಿಯ ಮುಡಿಗೆ ಈ ಹೂ ಮಾಲೆಯನ್ನು ಏರಿಸಿ ಅವಳು ಪಡುವ ಆನಂದವನ್ನು ಸಂತೋಷವನ್ನೂ ಕಣ್ಣಾರೆ ಕಾಣಬೇಕೆನ್ನುವ ಅಭಿಲಾಷೆಯಿಂದ ಹೂವಿನ ಸಹಿತ ಮನೆಗೆ ಬಂದು ಮಡದಿಯ ಮುಡಿಗೆ ಏರಿಸಿ

    Enjoying the preview?
    Page 1 of 1