Chaaturmaasya Vratha Aacharane, Chaaturmaasya Vrathada Aduge
By Vadiraja
()
About this ebook
ಪ್ರಪ್ರಥಮವಾಗಿ ಮಧ್ವಾಂತರ್ಗತ ಉಡುಪಿ ಶ್ರೀ ಕೃಷ್ಣನನ್ನು ಸ್ಮರಿಸುತ್ತ ಉಡುಪಿಯ ಅಷ್ಟ ಮಠದ ಶ್ರೀಪಾದರಿಗೆ ಭಕ್ತಿಪೂರ್ವಕ ನಮನಗಳು. ವಿದ್ವಾನ್ ನಿಪ್ಪಾಣಿ ಡಾ. ಗುರುರಾಜ ಆಚಾರ್ಯ, ಡಾ|| ಶ್ರೀ ಹೆಚ್. ಸತ್ಯನಾರಾಯಣಾಚಾರ್ಯ ಹಾಗೂ ವಿದ್ವಾನ್ ಶ್ರೀ ಅನಂತಕೃಷ್ಣಾಚಾರ್ಯರಿಗೆ ಗೌರವ ಪೂರ್ವಕವಾದ ಕೃತಜ್ಞತೆಗಳು.ಮಾಹಿತಿಯನ್ನು ಸಂಗ್ರಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
ಈ ಪುಸ್ತಕದಲ್ಲಿ ಉಡುಪಿ ಮಾಧ್ವ ಸಂಪ್ರದಾಯದಂತೆ ಚಾತುರ್ಮಾಸ್ಯ ವ್ರತದ ಆಚರಣೆ ಮತ್ತು ಚಾತುರ್ಮಾಸ್ಯ ವ್ರತದ ಅಡುಗೆಯನ್ನು ತಯಾರಿಸುವ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಕೊಡುವ ಪ್ರಯತ್ನ ಮಾಡಲಾಗಿದೆ.
ಭಾವಿ ಸಮೀರ ಶ್ರೀ ವಾದಿರಾಜ ಗುರು ಸಾರ್ವಭೌಮರು ಚಾತುರ್ಮಾಸ್ಯ ವ್ರತದ ಬಗ್ಗೆ ರಚಿಸಿದ ಪದ್ಯವನ್ನು ಸಮಗ್ರ ದಾಸ ಸಾಹಿತ್ಯ ಸಂಪುಟದಿಂದ ಸಂಗ್ರಹಿಸಲಾಗಿದೆ. ಈ ಪದ್ಯವನ್ನು ಶ್ರೀ ವಿನೀತ್ ಉಡುಪಿ ಸಂಗ್ರಹಿಸಿ ಕೊಟ್ಟಿದ್ದಾರೆ.
ಈ ಪುಸ್ತಕದಲ್ಲಿರುವ ಮಾಹಿತಿಯನ್ನು ವಿದ್ವಾನ್ ಡಾ|| ಶ್ರೀ ಹೆಚ್. ಸತ್ಯನಾರಾಯಣಾಚಾರ್ಯ ಅವರು ಬರೆದ ವಾರ್ಷಿಕ ವಿಶೇಷ ದಿನಗಳು ಪುಸ್ತಕ, ಉಡುಪಿ ಶ್ರೀ ಕೃಷ್ಣಾಪುರ ಮಠದಿಂದ ಪ್ರಕಟಣೆಯಾಗುತ್ತಿದ್ದ ಶ್ರೀಕೃಷ್ಣ ಪ್ರಕಾಶಿನಿ ಹಳೆಯ ಮಾಸ ಪತ್ರಿಕೆಗಳಿಂದ ಸಂಗ್ರಹಿಸಿದ ಲೇಖನಗಳು ಹಾಗೂ ಉಡುಪಿ ಶ್ರೀ ಪಲಿಮಾರು ಮಠದಿಂದ ಪ್ರಕಟಣೆಯಾಗುವ ಸರ್ವಮೂಲ ಮಾಸ ಪತ್ರಿಕೆಯಲ್ಲಿ ವಿದ್ವಾನ್ ಶ್ರೀ ಅನಂತಕೃಷ್ಣಾಚಾರ್ಯರು ಚಾತುರ್ಮ್ಯಾಸ ವ್ರತದ ಬಗ್ಗೆ ಬರೆದ ಲೇಖನಗಳಿಂದ ಸಂಗ್ರಹಿಸಲಾಗಿದೆ.
ಶ್ರೀಮತಿ ರಮಾದೇವಿ, ಶ್ರೀಮತಿ ಸುಧಾ ಭಟ್ಟ್, ಶ್ರೀಮತಿ ಭಾರ್ಗವಿ ರಾಜಮೂರ್ತಿ, ಚಾತುರ್ಮ್ಯಾಸ ವ್ರತದಲ್ಲಿ ತಯಾರಿಸಬಹುದಾದ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸುವ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.
ಓದುಗರು ಈ ಪುಸ್ತಕದಲ್ಲಿ ಕಂಡು ಬರುವ ಯಾವುದೇ ತರದ ದೋಷಗಳನ್ನು ನಮಗೆ ತಿಳಿಸಿದಲ್ಲಿ ದೋಷಗಳನ್ನು ಸರಿಪಡಿಸಲು ಸಹಾಯವಾಗುತ್ತದೆ. ಈ ಪುಸ್ತಕದಲ್ಲಿರುವ ಮಾಹಿತಿ ಓದುಗರಿಗೆ ಉಪಯೋಗವಾದಲ್ಲಿ ಅದು ಸಾಧ್ಯವಾಗಿದ್ದು ಉಡುಪಿ ಶ್ರೀ ಕೃಷ್ಣ ಹಾಗೂ ಶ್ರೀ ಮುಖ್ಯಪ್ರಾಣ ದೇವರಿಂದ.
- ವಾದಿರಾಜ ಮತ್ತು ರಾಜಮೂರ್ತಿ
Related to Chaaturmaasya Vratha Aacharane, Chaaturmaasya Vrathada Aduge
Related ebooks
Geethantharanga Darshanam Rating: 0 out of 5 stars0 ratingsHei Kaapurusha Rating: 0 out of 5 stars0 ratingsFrom My Heart (20 Kannada Poems) Rating: 0 out of 5 stars0 ratingsParidhi Rating: 0 out of 5 stars0 ratingsVishwam Shubham Mangalam Rating: 0 out of 5 stars0 ratingsKeshavankitha Rachanegalu - Tatvarajakarana Rating: 0 out of 5 stars0 ratingsಯಶೋಃಗೀತ Rating: 0 out of 5 stars0 ratingsEVEREST IN MIND (KANNADA) Rating: 0 out of 5 stars0 ratingsRamanakathe Rating: 3 out of 5 stars3/5Karmanye Vadhikaraste Rating: 0 out of 5 stars0 ratingsKshameyirali Taayi Tunge... Rating: 0 out of 5 stars0 ratingsAbhramana Rating: 0 out of 5 stars0 ratingsYashassina Rahasyagalu Rating: 3 out of 5 stars3/5ಒಂದು ಬೊಗಸೆ ಪ್ರೀತಿ: Ondu bogase preethi Rating: 5 out of 5 stars5/5Parimidita Rating: 0 out of 5 stars0 ratings
Reviews for Chaaturmaasya Vratha Aacharane, Chaaturmaasya Vrathada Aduge
0 ratings0 reviews
Book preview
Chaaturmaasya Vratha Aacharane, Chaaturmaasya Vrathada Aduge - Vadiraja
http://www.pustaka.co.in
ಚಾತುರ್ಮಾಸ್ಯ ವ್ರತ ಆಚರಣೆ ಮತ್ತು ಚಾತುರ್ಮಾಸ್ಯ ವ್ರತದ ಅಡುಗೆ
Chaaturmaasya Vratha Aacharane, Chaaturmaasya Vrathada Aduge
Author:
ವಾದಿರಾಜ
Vadiraja
For more books
http://www.pustaka.co.in/home/author/bhavani-ajit-katte
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಚಾತುರ್ಮಾಸ್ಯ ವ್ರತ ಮತ್ತು ವ್ರತದ ಅಡುಗೆ
[ಉಡುಪಿ ಮಾಧ್ವ ಸಂಪ್ರದಾಯ]
ಸಂಗ್ರಹ
ವಾದಿರಾಜ ಮತ್ತು ರಾಜಮೂರ್ತಿ
***
ಸಮರ್ಪಣೆ
ಶ್ರೀ ಮುಖ್ಯ ಪ್ರಾಣ
ಅಂತರ್ಯಾಮಿ
ಉಡುಪಿ
ಶ್ರೀ ಕೃಷ್ಣ ದೇವರಿಗೆ
***
ಪೀಠಿಕೆ
ಪ್ರಪ್ರಥಮವಾಗಿ ಮಧ್ವಾಂತರ್ಗತ ಉಡುಪಿ ಶ್ರೀ ಕೃಷ್ಣನನ್ನು ಸ್ಮರಿಸುತ್ತ ಉಡುಪಿಯ ಅಷ್ಟ ಮಠದ ಶ್ರೀಪಾದರಿಗೆ ಭಕ್ತಿಪೂರ್ವಕ ನಮನಗಳು.
ವಿದ್ವಾನ್ ನಿಪ್ಪಾಣಿ ಡಾ. ಗುರುರಾಜ ಆಚಾರ್ಯ, ಡಾ|| ಶ್ರೀ ಹೆಚ್. ಸತ್ಯನಾರಾಯಣಾಚಾರ್ಯ ಹಾಗೂ ವಿದ್ವಾನ್ ಶ್ರೀ ಅನಂತಕೃಷ್ಣಾಚಾರ್ಯರಿಗೆ ಗೌರವ ಪೂರ್ವಕವಾದ ಕೃತಜ್ಞತೆಗಳು.ಮಾಹಿತಿಯನ್ನು ಸಂಗ್ರಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.
ಈ ಪುಸ್ತಕದಲ್ಲಿ ಉಡುಪಿ ಮಾಧ್ವ ಸಂಪ್ರದಾಯದಂತೆ ಚಾತುರ್ಮಾಸ್ಯ ವ್ರತದ ಆಚರಣೆ ಮತ್ತು ಚಾತುರ್ಮಾಸ್ಯ ವ್ರತದ ಅಡುಗೆಯನ್ನು ತಯಾರಿಸುವ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಕೊಡುವ ಪ್ರಯತ್ನ ಮಾಡಲಾಗಿದೆ.
ಭಾವಿ ಸಮೀರ ಶ್ರೀ ವಾದಿರಾಜ ಗುರು ಸಾರ್ವಭೌಮರು ಚಾತುರ್ಮಾಸ್ಯ ವ್ರತದ ಬಗ್ಗೆ ರಚಿಸಿದ ಪದ್ಯವನ್ನು ಸಮಗ್ರ ದಾಸ ಸಾಹಿತ್ಯ ಸಂಪುಟದಿಂದ ಸಂಗ್ರಹಿಸಲಾಗಿದೆ. ಈ ಪದ್ಯವನ್ನು ಶ್ರೀ ವಿನೀತ್ ಉಡುಪಿ ಸಂಗ್ರಹಿಸಿ ಕೊಟ್ಟಿದ್ದಾರೆ.
ಈ ಪುಸ್ತಕದಲ್ಲಿರುವ ಮಾಹಿತಿಯನ್ನು ವಿದ್ವಾನ್ ಡಾ|| ಶ್ರೀ ಹೆಚ್. ಸತ್ಯನಾರಾಯಣಾಚಾರ್ಯ ಅವರು ಬರೆದ ವಾರ್ಷಿಕ ವಿಶೇಷ ದಿನಗಳು ಪುಸ್ತಕ, ಉಡುಪಿ ಶ್ರೀ ಕೃಷ್ಣಾಪುರ ಮಠದಿಂದ ಪ್ರಕಟಣೆಯಾಗುತ್ತಿದ್ದ ಶ್ರೀಕೃಷ್ಣ ಪ್ರಕಾಶಿನಿ ಹಳೆಯ ಮಾಸ ಪತ್ರಿಕೆಗಳಿಂದ ಸಂಗ್ರಹಿಸಿದ ಲೇಖನಗಳು ಹಾಗೂ ಉಡುಪಿ ಶ್ರೀ ಪಲಿಮಾರು ಮಠದಿಂದ ಪ್ರಕಟಣೆಯಾಗುವ ಸರ್ವಮೂಲ ಮಾಸ ಪತ್ರಿಕೆಯಲ್ಲಿ ವಿದ್ವಾನ್ ಶ್ರೀ ಅನಂತಕೃಷ್ಣಾಚಾರ್ಯರು ಚಾತುರ್ಮ್ಯಾಸ ವ್ರತದ ಬಗ್ಗೆ ಬರೆದ ಲೇಖನಗಳಿಂದ ಸಂಗ್ರಹಿಸಲಾಗಿದೆ.
ಶ್ರೀಮತಿ ರಮಾದೇವಿ, ಶ್ರೀಮತಿ ಸುಧಾ ಭಟ್ಟ್, ಶ್ರೀಮತಿ ಭಾರ್ಗವಿ ರಾಜಮೂರ್ತಿ, ಚಾತುರ್ಮ್ಯಾಸ ವ್ರತದಲ್ಲಿ ತಯಾರಿಸಬಹುದಾದ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸುವ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.
ಓದುಗರು ಈ ಪುಸ್ತಕದಲ್ಲಿ ಕಂಡು ಬರುವ ಯಾವುದೇ ತರದ ದೋಷಗಳನ್ನು ನಮಗೆ ತಿಳಿಸಿದಲ್ಲಿ ದೋಷಗಳನ್ನು ಸರಿಪಡಿಸಲು ಸಹಾಯವಾಗುತ್ತದೆ. ಈ ಪುಸ್ತಕದಲ್ಲಿರುವ ಮಾಹಿತಿ ಓದುಗರಿಗೆ ಉಪಯೋಗವಾದಲ್ಲಿ ಅದು ಸಾಧ್ಯವಾಗಿದ್ದು ಉಡುಪಿ ಶ್ರೀ ಕೃಷ್ಣ ಹಾಗೂ ಶ್ರೀ ಮುಖ್ಯಪ್ರಾಣ ದೇವರಿಂದ.
- ವಾದಿರಾಜ ಮತ್ತು ರಾಜಮೂರ್ತಿ
***
ಚಾತುರ್ಮಾಸ್ಯ ವ್ರತ
ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ. ದೇವತೆಗಳಿಗೆ ಉತ್ತರಾಯನದ ಆರು ತಿಂಗಳು ಹಗಲು ದಕ್ಷಿನಾಯನದ ಆರು ತಿಂಗಳು ರಾತ್ರಿ. ಆರು ತಿಂಗಳ ರಾತ್ರಿಯಲ್ಲಿ ನಾಲ್ಕು ತಿಂಗಳು ನಿದ್ರಾಕಾಲ.
ಏಕಾದಶ್ಯಾಂ ತು ಶುಕ್ಲಾಯಾಂ ಆಷಾಢೇ ಭಗವಾನ್ ಹರಿಃ |
ಭುಜಂಗಶಯನೇ ಶೇತೇ ಕ್ಷೀರಾರ್ಣವಜಲೇ ಸದಾ ||
ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು ಭಗವಂತನು ಮಲಗುವುದರಿಂದ ಈ ಏಕಾದಶಿಯನ್ನು ಶಯನೀ ಏಕಾದಶಿ ಎಂದು ಕರೆಯುವರು.
ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯ ತನಕ ಭಗವಂತನ ಯೋಗ ನಿದ್ರಾಕಾಲ ! ಈ ನಾಲ್ಕು ತಿಂಗಳುಗಳಿಗೆ ಚಾತುರ್ಮಾಸವೆಂದೂ ಈ ತಿಂಗಳಲ್ಲಿ ಆಚರಿಸುವ ವ್ರತಕ್ಕೆ ಚಾತುರ್ಮಾಸ್ಯ ವ್ರತವೆಂದೂ ಹೆಸರು.
ಚಾತುರ್ಮಾಸ್ಯ ವ್ರತವನ್ನು ಪ್ರತಿಯೊಬ್ಬರು ಆಚರಿಸಬೇಕು. ಆರೋಗ್ಯದ ದೃಷ್ಟಿಯಿಂದಲೂ ಇದು ಉಪಯುಕ್ತವಾಗಿದೆ ಕೇವಲ ಅಶಕ್ತರು ರೋಗಿಗಳಿಗೆ ಮಾತ್ರ ರಿಯಾಯಿತಿ ಇದೆ.
ಚಾತುರ್ಮಾಸ್ಯ ಕಾಲದ ಪ್ರತಿಯೊಂದು ತಿಂಗಳಿನ ವ್ರತದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ನೀಷೇಧಿಸಿರುವರು.
***
ಭಾವಿ ಸಮೀರ ಶ್ರೀ ವಾದಿರಾಜ ಗುರು ಸಾರ್ವಭೌಮರು ಚಾತುರ್ಮಾಸ್ಯ ವ್ರತದ ಬಗ್ಗೆ